Thursday, January 21, 2010

ವೀರವ್ರತನ ವಚನ - ಭಯವಿರದ ಭಾರತವ ಕಟ್ಟಲೋಸುಗ ಬನ್ನಿ



ಹರಿ ಓಂ, ಪ್ರಿಯ ದೇಶಭಕ್ತರೇ. ನನ್ನ ಹಿಂದೂ ರಾಷ್ಟ್ರಭಕ್ತಿ ಬ್ಲಾಗಿಗೆ ಸ್ವಾಗತ. ಈ ಬ್ಲಾಗಿನಲ್ಲಿ ನಾನು ಭಾರತ, ಹಿಂದೂ ಮತ್ತು ಸಂಸ್ಕೃತಿಯ ಗೀತೆಗಳನ್ನು ಪ್ರಕಟಿಸುತ್ತೇನೆ. ಈ ಗೀತೆಗಳು ನಮ್ಮ ಧ್ಯೇಯ ಮತ್ತು ಕಾರ್ಯನಿಷ್ಠೆಗೆ ಸ್ಪೂರ್ತಿಯಾಗಿರಲಿ. ಅಂದು ಧೀಮಂತ ರಾಷ್ಟ್ರವೆನಿಸಿದ್ದ, ವಿಶ್ವಗುರುವೆನಿಸಿದ್ದ ನಾವು, ಮತ್ತೆ ಆ ಪರಮ ವೈಭಕ್ಕೆ ಎಲ್ಲರನ್ನೂ ಕರೆದೊಯ್ಯೋಣ.
ಜೈ ಜನನೀ, ಜೈ ಭಾರತಾಂಬೆ


ಭಯವಿರದ ಭಾರತವ ಕಟ್ಟಲೋಸುಗ ಬನ್ನಿ
ಜಯಧ್ವನಿಯ ಜಗದಗಲ ಮೊಳಗಿಸುವ ಬನ್ನಿ ||ಪ||


ಹಿಂದು ಹೆದ್ದೆರೆಯಲ್ಲಿ ಕೊಚ್ಚಿ ಹೋಗಲಿ ಭೇದ
ಬಂಧುತ್ವ ಹಿರಿದಾಗಿ ರಾಷ್ಟ್ರಬೋಧ
ಸಿಂಧುವಿನ ಸೆರಗಿನಲಿ ಉಗ್ರತೆಯು ಬೆಳೆಯುತಿದೆ
ಮುಂದಾಗಿ ಎದುರಿಸುವ ಕ್ಷಾತ್ರಯೋಧ ||೧||


ದೈನ್ಯವೇತಕೆ ನಿನಗೆ ಮಾನ್ಯ ಭಾರತಿಪುತ್ರ
ಕಪಿಸೈನ್ಯ ಸಾಗರವ ದಾಟಿಲ್ಲವೇನು?
ವೈನತೇಯನು ತಂದ ಪೀಯೂಷವಿರುವಾಗ
ಸಾವೆಂಬ ವಿಷಸರ್ಪಕಂಜಲೇನು? ||೨||


ಭಾರತದ ಬಹುಳತೆಗೆ ಹಿಂದುತ್ವವಡಿಪಾಯ
ಮರೆಯದಿರು ಮುರಿಯದಿರು ಸೇತುಬಂಧ
ಕರೆಯದೇ ಬಂದವರು ಉಳಿದುಕೊಂಡಿಹರಿಲ್ಲಿ
ಉರುಳಾಗದಿರಲಿ ದಯೆ ಔದಾರ್ಯವು ||೩||


ಭ್ರಮೆಯ ಸೇವೆಯ ನೆಪದಿ ಪರಮತದ ಆಕ್ರಮಣ
ತಮಕೆ ತುತ್ತಾಗುತಿದೆ ನಮ್ಮ ಗೋವು
ಅಮರನಾಥದಿ ಮೆರೆದ ಏಕತೆಯೆ ಪ್ರೇರಣೆಯು
ಸಮರವಾದರು ಸರಿಯೆ ಸಿದ್ಧನಾವು ||೪||

No comments: