Wednesday, July 10, 2013

ಬೆಂಗಳೂರು ಮಹಾನಗರ, ಜಯನಗರ ಭಾಗದ 2013 ಬೌದ್ಧಿಕ್ ಪ್ರತಿಯೋಗಿತದ ವಿಷಯಗಳು

ನಿಯಮಗಳು:

1. ಪ್ರತಿ ಶಾಖೆಯಿಂದ ಕನಿಷ್ಠ 6ನೇ ತರಗತಿಯಲ್ಲಿ ಓದುತ್ತಿರುವ ಕನಿಷ್ಠ 6 ಸ್ವಯಂಸೇವಕರಿರುವ ತಂಡ ಭಾಗವಹಿಸಬಹುದು. ಗರಿಷ್ಠ ವಯಸ್ಸಿನ ನಿರ್ಬಂಧವಿಲ್ಲ. ಗರಿಷ್ಠ ಸಂಖ್ಯೆಯ ನಿರ್ಬಂಧವಿಲ್ಲ.

2. ತಂಡವು ಹಾಡು ಮತ್ತು ಶ್ಲೋಕಗಳೆರಡರಲ್ಲೂ ಭಾಗವಹಿಸಬೇಕು.

3. ಒಂದು ಶಾಖೆಯಿಂದ ಎಷ್ಟು ತಂಡಗಳು ಬೇಕಾದರೂ ಭಾಗವಹಿಸಬಹುದು.

4. ಒಂದು ತಂಡದಲ್ಲಿ 9 ಕ್ಕಿಂತ ಹೆಚ್ಚು (ಅಂದರೆ 10 ರಿಂದ 19) ಸ್ವಯಂಸೇವಕರು ಭಾಗವಹಿಸಿದರೆ ಒಂದು ಬೋನಸ್ ಅಂಕ ಸಿಗುತ್ತದೆ.

5. ಒಂದು ತಂಡದಲ್ಲಿ 19 ಕ್ಕಿಂತ ಹೆಚ್ಚು (ಅಂದರೆ 20+) ಸ್ವಯಂಸೇವಕರು ಭಾಗವಹಿಸಿದರೆ ಎರಡು ಬೋನಸ್ ಅಂಕ ಸಿಗುತ್ತದೆ.

ಹಾಡು:
ಬನ್ನಿ ಸೋದರರೆ ಬನ್ನಿ ಬಾಂಧವರೆ
ಬನ್ನಿ ಸೋದರರೆ ಬನ್ನಿ ಬಾಂಧವರೆ
ಹೃದಯ ಹೃದಯಗಳ
ಬೆಸೆಯೋಣ |
ವಸುಧಾ ಕುಟುಂಬ
ರಚಿಸೋಣ
ಮೊಳಗಲಿ ತಾಯ
ಯಶೋಗಾನ
ಭಾರತೀ ಜಯ ಭಾರತೀ ಜಯ ಭಾರತೀ ಜಯ ಭಾರತೀ ||
ಪ||

ಹಸಿವಡಗಲಿ ತೃಷೆ ಹಿಂಗಲಿ - ಅಜ್ಞಾನದ ಪೊರೆ ಹರಿಯಲಿ
ರೋಗ ರೂಢಿಗೊದಗಲಿ ಅವಸಾನ - ಸುತರೆಮಗಿದು
ಕರ್ತವ್ಯಪಣ
ಧರೆ ಎನಿಸಲಿ ಆನಂದವನ || ವಸುಧಾ ಕುಟುಂಬ ... ||
೧||

ಕೊರತೆ ಕಲುಷಗಳನಳೆದಳೆದು - ಸರಿಯುತ್ತರ ಸುರಿಮಳೆಗರೆದು
ಸರ್ವವ್ಯಾಪಿಯಾಗಲಿ ಸಂಕ್ರಮಣ - ಸಂಘಟನಾಬಲ
ನಿರ್ಮಾಣ
ವಿಶ್ವ ಸಂತತಿಯ ಕಲ್ಯಾಣ || ವಸುಧಾ ಕುಟುಂಬ ... ||
೨||

ಹಿಂದು ಚಿಂತನಾನುಷ್ಠಾನ - ತಂದೊಲಿಸಲಿ ಜಗದುತ್ಥಾನ
ಮಾತೆ ಭಾರತಿಯ ವೈಭವ ಸುದಿನ - ಮೈದಾಳಲಿ
ನೆಲದಭಿಮಾನ
ಹಿಂದುತ್ವದ ನವ ಜಾಗರಣ || ವಸುಧಾ ಕುಟುಂಬ ... ||||

ಶ್ಲೋಕಗಳು

ಜುಲೈ ತಿಂಗಳ ಶ್ಲೋಕಗಳು

1. ಹಿಮಾಲಯಂ ಸಮಾರಭ್ಯ
ಯಾವದಿಂದು ಸರೋವರಂ ।
ತಂ ದೇವ ನಿರ್ಮಿತಂ ದೇಶಂ
ಹಿಂದುಸ್ಥಾನಂ ಪ್ರಚಕ್ಷತೆ ॥

2. ಯಥಾ ಚಿತ್ತಂ ತಥಾ ವಾಚಃ
ಯಥಾ ವಾಚಸ್ತಥಾ ಕ್ರಿಯಾಃ |
ಚಿತ್ತೇ ವಾಚಿ ಕ್ರಿಯಾಯಾಂ ಚ
ಮಹತಾಂ ಏಕರೂಪತಾ ||

3. ಪರೋಪಕಾರಾಯ ಫಲಂತಿ ವೃಕ್ಷಾಃ
ಪರೋಪಕಾರಾಯ ದುಹಂತಿ ಗಾವಃ |
ಪರೋಪಕಾರಾಯ ಬಹಂತಿ ನದ್ಯಃ
ಪರೋಪಕಾರಾರ್ಥಮಿದಂ ಶರೀರಂ ||

4. ಮಾತೃವತ್ ಪರದಾರೇಷು
ಪರದ್ರವ್ಯೇಷು ಲೋಷ್ಠವತ್ |
ಆತ್ಮವತ್ ಸರ್ವಭೂತೇಷು
ಯಃ ಪಶ್ಯತಿ ಸ ಪಂಡಿತಃ ||
ಅಗಸ್ಟ್ ತಿಂಗಳ ಶ್ಲೋಕಗಳು

1. ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ ।
ಬೆಲ್ಲ ಸಕ್ಕರೆಯಾಗು ದೇನದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ ॥

2. ಘನತತ್ವವೊಂದಕ್ಕೆ ದಿನರಾತ್ರಿ ಮನಸೋತು
ನೆನೆಯದಿನ್ನೊಂದನೆಲ್ಲವ ನೀಡುತದರಾ|
ಅನುಸಂಧಿಯಲಿ ಜೀವಭಾರವನು ಮರೆಯುವುದು
ಹನುಮಂತನುಪದೇಶ - ಮಂಕುತಿಮ್ಮ||

3. ನಡೆವುದೊಂದೇ ಭೂಮಿ
ಕುಡಿವುದೊಂದೇ ನೀರು
ಸುಡುವಗ್ನಿಯೊಂದೇ ಇರುತಿರಲು| ಕುಲಗೋತ್ರ
ನಡುವೆ ಎತ್ತಣದು - ಸರ್ವಜ್ಞ||

4. ದೇವರಿಗಿಲ್ಲ ಜಾತಿಯ ಭೇದ
ಭಕುತರಿಗಂತೂ ಇಲ್ಲ |
ಜಾತಿಭೇದದ ಸುಳಿಗೆ ಸಿಲುಕಿ
ಮುಳುಗದಿರೋ ಮನುಜ - ಕಬೀರಾ||